Archive for the ‘ಎರವಲು’ Category

Earth Hour

ಮಾರ್ಚ್ 21, 2009

Come, let us join and make difference. To join click here

3259590137_3560ac298e
“Earth Hour is an annual international event created by the WWF (World Wide Fund for Nature/World Wildlife Fund), held on the last Saturday of March, that asks households and businesses to turn off their non-essential lights and electrical appliances for one hour to raise awareness towards the need to take action on climate change. It was pioneered by WWF Australia and the Sydney Morning Herald in 2007,[1] and achieved worldwide participation in 2008.

Earth Hour will next take place on Saturday, March 28, 2009 at 8:30 pm, local time

en.wikipedia.org (click on it to know more about earth hour)

ಮಹಾ ಆತ್ಮ -೩

ಸೆಪ್ಟೆಂಬರ್ 27, 2008

ನಾನು ಗಾಂಧಿ ಬಗ್ಗೆ ಬರೆಯುತ್ತಿದ್ದೇನೆ ಎಂದು ಹೇಳಿದ ತಕ್ಷಣದ ಪ್ರತಿಕ್ರಿಯೆ,ಅವರು ತಮ್ಮ ಸಂಯಮ ಪರೀಕ್ಷೀಸಲು ಹುಡುಗಿಯರೊಂದಿಗೆ ಮಲಗಿದ್ದು ಗೊತ್ತಾ ? ನನಗೆ ಮೊನ್ನೆ ಮೊನ್ನೆಯವರೆಗೆ ಗೊತ್ತಿರಲಿಲ್ಲ. ಏನೂಂದ್ರೆ ಗಾಂಧಿ ನಗ್ನರಾಗಿ ಅವರ ಜೊತೆ ಮಲಗಿದ್ದರು ಎಂದು. ನನಗೆ ತಲೆಗೆ ಹೊಡೆದ ಹಾಗೆ ಆಯಿತು. ಅಜ್ಜನ ವಿಚಾರಗಳ ಕುರಿತು ಹೇಳುತ್ತಿದ್ದಾಗ ಅವರ ಖಾಸಗಿ ಬದುಕನ್ನು ಯಾಕೆ ಎತ್ತಿ ಹಿಡಿಯುತ್ತಾರೆ ಅಂತ ನನಗೆ ಯಾವಾಗಲೂ ಗೊತ್ತಾಗುವುದಿಲ್ಲ. ಇದೊಂದೇ ಸಲ ಅಲ್ಲ. ನಾನು ಅಜ್ಜನ ಬಗ್ಗೆ ಮಾತನಾಡುತ್ತಿರುವಾಗ ತರಹದ ವಿಷಯಗಳು ಮಧ್ಯ ಇಣುಕುತ್ತವೆ. ಅಥವಾ ಇವು ನನ್ನ ಗಾಂಧಿ ಪ್ರೀತಿಯನ್ನು ಮುಗಿಸಲು ಮಾಡುವ ಪ್ರಹಾರವೇ ಎಂದೆಲ್ಲ ಯೋಚಿಸಿದ್ದೇನೆ. ನನಗೆ ಅವಳ ಬಗ್ಗೆ ಅನುಕಂಪವಾಯಿತು. ನೀನು ಗಾಂಧಿ ಓದಿದ್ದಿಯಾ ಎಂದು ಕೇಳಿದೆ. ಹಾಗಾದಲ್ಲಿ ಮೊದಲು ನೀನು ಓದು. ಆಮೇಲೆ ಮಾತಾಡೋಣ ಅಂದೇ. ಮರುದಿನ ನಾ ಬರೆದಿದ್ದ ಓದಿ ಮಾತಾಡಲೇ ಇಲ್ಲ. ಅವಳಿಗದು ಹೊಸ ವಿಷಯವಂತೆ. ಯಾವುದು ಸತ್ಯ ಎಂಬ ಗೊಂದಲ ನನಗೆ ಈಗ ಬೇಡ ಎಂದು log off ಅಂದಳು . ಖರೆ, ನಾನು ಅವಳು ಓದಿದ ಸಾವರ್ಕರ್/RSS ಓದಿಲ್ಲ. ಆದರೆ ಸಾವರ್ಕರ ಯಾಕೆ ಗಾಂಧಿಯನ್ನು ತೆಗಳ್ತಾರೆ ? ಕೇವಲ ವಿಚಾರ ಧರ್ಮದಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ? ನಾನು ಒಪ್ಪುವುದಿಲ್ಲ ( ಓದುವ ತನಕ). ಉನ್ನತ ವಿಚಾರಗಳಿರುವ ಮಂದಿ ( ಬುದ್ಧಿ ಜೀವಿಗಳು) ತಮ್ಮ ತಮ್ಮಲ್ಲೇ ದೋಷಾರೋಪಣೆ ಮಾಡಬಹುದು. ಅಂದ ಮಾತ್ರಕ್ಕೆ ಅದು ದ್ವೇಷದಿಂದ ಅಂತಲ್ಲ. ಅವರಷ್ಟು ವಿಚಾರದಲ್ಲಿ ಪ್ರಭುದ್ದರಾದಾಗ ಅವರು ಯಾಕೆ ಹಾಗೆ ಹೇಳಿದ್ದು ಎಂದು ಅರ್ಥವಾಗಬಹುದು. ಬಹು ಸಮಯದಲ್ಲಿ ಅನರ್ಥಗಳಾದದ್ದೇ ಹೆಚ್ಚು.

ಆಕೆ ಕೇಳಿದ್ದು ಭಗತ್ ಸಿಂಗ್ ನನ್ನು ನೇಣಿಗೆ ಏರಿಸಬೇಕೆಂದಿದ್ದಾಗ ಗಾಂಧಿ ಯಾಕೆ ಅವನ ಪರವಾಗಿ ಸತ್ಯಾಗ್ರಹ ಮಾಡಲಿಲ್ಲ ಎಂದು. ನನಗೆ ತರ್ಕವೇ ಸಮಂಜಸವಾಗಿ ತೋರುವುದಿಲ್ಲ. ಗಾಂಧಿ ಅಜ್ಜನದು ಅಹಿಂಸಾವಾದ. ಅದನ್ನು ಸಾಧಿಸಲು ಇರುವ ಒಂದು ದಾರಿ ಸತ್ಯಾಗ್ರಹ. ಹಿಂಸೆಯನ್ನು ಅವರು ಯಾವ ಕಾರಣಕ್ಕಾಗಿ ಒಪ್ಪಬೇಕು ಹಾಗೂ ಬೆಂಬಲ ಕೊಡಬೆಕ್ಕೀತ್ತೆಂದು ಈಗೀನ ಜನ ಕೇಳುತ್ತಾರೋ ಗೊತ್ತಾಗುವುದಿಲ್ಲ. ಹಿಂಸೆಯಿಂದ ಕ್ರಾಂತಿ ಮಾಡಲು ಹೊರಟವರಿಗೆ ಬೆಂಬಲ ಕೊಟ್ಟಿದ್ದರೆ ಇಡೀ ಜೀವನದುದ್ದಕ್ಕೂ ಮಾಡುತ್ತಿದ್ದ ಹೋರಾಟಕ್ಕೆ ಅರ್ಥವಿರುತ್ತಿತ್ತೇ ? ಭಗತ್ ಸಿಂಗರ ಬೆಂಬಲಿಗರಿಗೆ ಗಾಂಧಿ ಮೇಲಿರುವಷ್ಟು ಕೋಪ, ದ್ವೇಷ ಸ್ವತಹ ಭಗತ್ ಸಿಂಗರಿಗೆ ಇರಲಿಲ್ಲವೇನೊ. ನನಗೆ ಗಾಂಧಿ ಅಜ್ಜನಷ್ಟೇ ಪ್ರೀತಿ ಭಗತ್ ಸಿಂಗರ ಮೇಲೂ ಇದೆ. ಅವರ ಬಂಡಾಯಕ್ಕೆ, ಶೌರ್ಯಕ್ಕೆ, ಸ್ವಾತಂತ್ರ್ಯ ಪ್ರೇಮಕ್ಕೆ ನನ್ನದೊಂದು ಸಲಾಂ ಇದ್ದೇ ಇರುತ್ತದೆ

ಪ್ರವಾದಿ

ಸೆಪ್ಟೆಂಬರ್ 27, 2008

ನನಗೆ ಯಾವಾಗಲೂ ಕುರಾನ್ ನಲ್ಲಿ ಅಲ್ಲಾಹುವನ್ನು ನಂಬದಿರುವ ಜನರನ್ನು ಕೊಲ್ಲಬೇಕು ಅನ್ನುವುದಿದೆ ಅಂದರೆ ನಂಬಲಿಕ್ಕಾಗುವುದಿಲ್ಲ. ಅನ್ಯಧರ್ಮಿಯರನ್ನು ಕಂಡರೇ ನನ್ನ ಸ್ನೇಹಿತರ ತರಹ ಮೈ ಉರಿಯುವುದಿಲ್ಲ. ಅವರ ಬಗೆಗಿನ ಕುತೂಹಲ ಹೆಚ್ಚುತ್ತದೆ. ಎಷ್ಟೋ ಸಲ ಸ್ನೇಹಿತರು ನೀನು ಅವರ ಪರ ವಾದ ಮಾಡುವ ಬದಲು ಮುಸ್ಲಿಮ್ / ಕ್ರಿಶ್ಚಿಯನ್ ಆಗಿ ಬಿಡು ಎಂದು ಸಿಟ್ಟಲ್ಲಿ ಬಯ್ಯುತ್ತಿರುತ್ತಾರೆ. ಯಾಕೋ , ನಾನು ಹುಟ್ಟಿನಿಂದ ಬ್ರಾಹ್ಮಣನಾಗಿದ್ದಕ್ಕೋ ಇಲ್ಲಾ ವೇದ, ವಿಜ್ಞಾನ, ದೇವರು, ಅದ್ಯಾತ್ಮ ಇವೆಲ್ಲರೆಡೆಗಿನ ಜಿಜ್ಞಾಸೆಯನ್ನು ಕೇಳುತ್ತ ಬೆಳೆದಿದ್ದಕ್ಕೋ ನನ್ನಲ್ಲಿ ಸಾವಿರ ಪ್ರಶ್ನೆಗಳು. ನನ್ನ ಬಂಡಾಯ ನೋಡಿ ಹೆದರಿ (ಉತ್ತರಿಸಕ್ಕಾಗದೆ ) ನನ್ನಮ್ಮ ನನ್ನ ಮೇಲಿನ ಆಸೆಯನ್ನೇ ಬಿಟ್ಟಿದ್ದರು ! ಕಾಲದಲ್ಲೇ ನಾನು ಮೂರು ಕಿರು ಪುಸ್ತಕಗಳನ್ನು ಓದಿದ್ದು. ಅದಾದ ಮೇಲೆ ಎಲ್ಲ ಧರ್ಮಗಳು ಹೇಳುವುದು ಒಂದೇ ಎನ್ನುವುದು ಏಷ್ಟು ಸತ್ಯ ಅನಿಸಿತು. ಮುಂದೆ sociology ಲಿ ಹಿಂದೂ ಧರ್ಮದ ಮೇಲೆ ಅಧ್ಯಯನ ಮಾಡಿದಾಗ ನಾನೊಬ್ಬ ಹಿಂದೂ ಎನ್ನುವುದರ ಬಗ್ಗೆ ಅದೆಷ್ಟು ಹೆಮ್ಮೆ ಪಟ್ಟೆ. ತನಕ ಯಾರೂ ಅಷ್ಟು ಸರಳಿಕೃತವಾಗಿ ಸನಾತನ ಧರ್ಮದ ಬಗ್ಗೆ ತಿಳಿಸಿ ಹೇಳಿರಲಿಲ್ಲ. ಗಾಂಧಿ ಬಗ್ಗೆ (ಸರ್ವೋದಯ) ಅಚ್ಚರಿ ಹುಟ್ಟಿದ್ದು ಹೊತ್ತಲ್ಲೇ. ನಾನು ಅಲ್ಲೂ ಇದ್ದೇನೆ. ಇಲ್ಲೂ ಇದ್ದೇನೆ. ಎಲ್ಲೆಲ್ಲಿಯೂ ಇದ್ದೇನೆ. ಹೀಗೆ ಇದ್ದು ಇಲ್ಲವಾಗಿದ್ದೇನೆ. ಇಲ್ಲವಾಗಿಯೂ ಇದ್ದೇನೆ ಎಂದೆಲ್ಲ ಅನ್ನಿಸಿದ್ದು ಆಗಲೇ. ಪುಟ್ಟ ಪುಸ್ತಕ( Thus Spake, Prophet Muhammad)ವನ್ನು ಸಂಗ್ರಹಿಸಿದ್ದು ಡಾ. ಎಂ. ಹಫೀಜ್ ಸೈಯದ್. ಪ್ರಕಟನೆ ರಾಮಕೃಷ್ಣ ಮಠ, ಮೈಸೂರು. ಸಂಗ್ರಹಕಾರರು ಅಲ್ಲಹಾಬಾದ್ ಯೂನಿವರ್ಸಿಟಿಯವರು. ಪರ್ಶಿಯನ್ ಮತ್ತು ಅರೇಬೀಕ್ ಭಾಷೆಗಳಲ್ಲಿ ಇದ್ದದ್ದನ್ನು ಭಾಷಾಂತರ ಮಾಡಿದ್ದಾರೆ.

ಅದರ ಕೆಲ ವಾಕ್ಯಗಳು ಇಲ್ಲಿವೆ ;

-A perfect Muslim is he from whose tongue and hands mankind is safe, and a Muhajir is he who flees from what god has forbidden

-The most excellent jihad is that for the conquest of self

-Keep yourselves far from envy; because it eats up and takes away good actions as fire eats up and burns wood

– I found this inscribed on the hilt of the Prophet’s sword; ‘ Forgive him who wrongs you; join him who cuts you off; do good to him who does evil to you, and speak the truth although it be against yourself’

-It is unworthy of a Mu’min to injure people’s reputations; and it is unworthy to abuse any one; and it is unworthy of a Mu’min to talk vainly

(ಇನ್ನೂ ಇದೆ. ಯಾರಿಗಾದರೂ ಆಸಕ್ತಿ ಇದ್ದರೆ ಪುಸ್ತಕ ಕೊನ್ಡು ಓದಿ. ಕೇವಲ ಮೂರು ರೂಪಾಯಿ )

ಶಾಲೆಗಳಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಬರೆಸುವ ಬದಲು ಎಲ್ಲ ಧರ್ಮದ ಪ್ರವಾದಿಗಳ, ಸಂತರ ಹಿತವಚನಗಳನ್ನು ಬರೆಸಿದ್ದರೆ ಎಷ್ಟು ಚೆನ್ನಾಗಿತ್ತು. ರಾಮಕೃಷ್ಣ, ವಿವೇಕಾನಂದ, ಮೊಹಮದ್, ಕ್ರಿಸ್ತ, ಗುರುನಾನಕ್ ಹೀಗೆ. ಸರ್ವ ಧರ್ಮೀಯ ಪಾಠಗಳು ಇದ್ದಿದ್ದರೆ ?

ಆಗಸ್ಟ್ ೧೫ ಮತ್ತು ಪಿಂಜರ್

ಆಗಷ್ಟ್ 19, 2008

ಮೊನ್ನೆ 15ಕ್ಕೆಪಿಂಜರ್‘ DVD ತಗೊಂಡೆ. ನಿಜಕ್ಕೂ ದಿನ ತಗೊಂಡಿದ್ದಕ್ಕೆ ಸಾರ್ಥಕವಾಯಿತು.
ಅದರಲ್ಲಿನ ಎರಡು ದೃಶ್ಯಗಳು ಇಲ್ಲಿವೆ.

ಹಿಂದೆ ಗಲಭೆಯ ಸದ್ದು.
ಪುರೋ : ಕ್ಯಾ ಹೊ ರಹಾ ಹೈ ರಶೀದ್ ?
ರಶೀದ್ : ಮುಲ್ಕ್ ಕಾ ಬಟವಾರಾ ಹೊ ಗಯಾ ಹೈ
ಪುರೋ : ಮೇ…… ಮೇ ….. ಅಬ್ ಕಂಹಾ ಹೂಂ ..

ತ್ರಿಲೋಕಜೀ, ಆಪ ಕೋ ಲಗತಾ ಹೈ ಕೀ ಬಟವಾರಾ ಹೋಗಾ?’
ಯದಿ ಹಮಾರಿ ನೇತಾ ಫಿರ್ ಏಕ್ ಬಾರ್ ಲಂಬಿ ಲಡಾಯಿ ಔರ್ ಜೇಲ್ ಜಾನೆ ಕೆ ಲಿಯೇ ತಯಾರ್ ಹುಯೇ, ತಬ್ ತೋ ನಹಿ

ಮಹಾ ಆತ್ಮ-೨

ಆಗಷ್ಟ್ 14, 2008

ಗಾಂಧಿ ಅಜ್ಜನ ಬಗ್ಗೆ ಬರೆಯುವುದು ಇಷ್ಟು ಕಷ್ಟ ಎಂಬುದರ ಅರಿವೆ ಇರಲಿಲ್ಲ. ನನ್ನ ಪಾಪದ ಅಜ್ಜ. ಇಷ್ಟು ದಿನ ತನ್ನ ಹಿಂದೆ ಇದ್ದು ಪ್ರಚಾರ ಗಿಟ್ಟಿಸಿ ಈಗ ಅಧಿಕಾರಕ್ಕಾಗಿ ಮಾಡುತ್ತಿರುವ ಹಪಾಹಪಿಯನ್ನು ಹೇಗೆ ಸಹಿಸಿದನೊ. ಇಡೀ ದೇಶದ ಜನತೆ ತನ್ನನ್ನು ನಂಬಿದೆ. ನಾಳೆ ಹೆಚ್ಚು ಕಡಿಮೆಯಾದಲ್ಲಿ ದೂಷಿಸುವುದು ತನ್ನನ್ನೆ, ತನ್ನ ಸಿದ್ದಾಂತಗಳನ್ನೇ. ಆದರೆ ತನ್ನ ತತ್ವಗಳನ್ನೆಲ್ಲ ಗಾಳಿಗೆ ತೂರಿ ಆಡಳಿತ ಮಾಡಲು ಬಯಸಿದ ಮೇಲಿನ ಜನರನ್ನು ಹೇಗೆ ಕ್ಷಮಿಸಿದನೊ.

ಕೇವಲ ಹಿಂದಿನ ದಿನ ಒಂದೇ ರಾಷ್ಟ್ರವಾಗಿದ್ದಂತಹ ಭಾರತವನ್ನುಎರಡು ರಾಷ್ಟ್ರಗಳನ್ನಾಗಿ ವಿಭಜಿಸುವ ಪೂರ್ಣ ಸಂಭ್ರಮ ಲಂಡ್ನನ್ನಿನಲ್ಲಿ ನೆರವೇರುವ ವಿಷಯವಾಗಿ ಇಂದು ಪತ್ರಿಕೆಗಳು ಪ್ರಸ್ತಾಪಿಸುತ್ತಿವೆ. ದುರಂತದಲ್ಲಿ ಹಿಗ್ಗುವಂಥದ್ದೇನಿದೆ ? ನಾವು ಬೇರೆ ಬೇರೆಯಾದರೂ ಒಂದೇ ಕುಟುಂಬಕ್ಕೆ ಸೇರಿದ ಸ್ನೇಹಿತರಂತೆ, ಸೋದರರಂತೆ ಹಾಗೆ ಮಾಡುವುದೆಂಬ ನಂಬಿಕೆಗೆ ಅಂಟಿಕೊಂಡಿದ್ದೆವು. ಈಗ, ಪತ್ರಿಕಾ ವರದಿ ನಿಜವಾಗಿದ್ದಾರೆ, ನಮ್ಮನ್ನುದ್ವಿರಾಷ್ಟ್ರವನ್ನಾಗಿ, ಅದೂ ವಾದ್ಯ ಘೋಷ ಸಮೇತ, ಆಂಗ್ಲರು ಮಾಡುವರು. ಇದು ನಿರ್ಗಮನದ ಕೊಡುಗೆಯಾಗಬೇಕೆ? ಹಾಗಾಗದಿರಲೆಂದು ನನ್ನ ಹಾರೈಕೆ.” – ಗಾಂಧಿ ಅಜ್ಜ

“…..ಹಾಗಾದರೆ ಇಲ್ಲಿ ನಡೆಯುತ್ತಿರುವ ವರ್ಣರಂಜಿತ ಮಾತುಗಳಿಗೆ ಬೆಲೆಯೇನು? ನೀವು ಅದಕ್ಕೆ ಸಮ್ಮತಿಯನ್ನು ಕೊಡದಿದ್ದರೆ ಪಾಪವನ್ನು ತಡೆಗಟ್ಟಬಹುದು. ಮಸೂದೆಯ ಕಾನೂನಿಗೆ ಅನುಮೋದನೆ ದೊರಕಿದ ಮೇಲೆ ಯಾರ ನಿಮ್ಮ ಮಾತಿಗೆ ಕೆವಿಗೊಡುವುದಿಲ್ಲ” – ಗಾಂಧಿ ಅಜ್ಜ

ಪುಸ್ತಕದ ಒಂದೊಂದು ಪುಟದಲ್ಲಿರುವ ಅದೆಷ್ಟೋ ಘಟನೆಗಳು, 61 ವರ್ಷಗಳ ಹಿಂದೆ ನಡೆದು ಹೋದ ರಾಜಕೀಯ ಸುಳಿಗಳು, ಗಾಂಧಿಕಾಂಗ್ರೇಸ್ಸುಆಂಗ್ಲರುಜಿನ್ನಾ ಪಂಗಡ. ಅಬ್ಬಾಬ್ಬಾ! ಇಷ್ಟೆಲ್ಲಾ ನಡೆದಿತ್ತೆ ? ಎಂದೆನಿಸಿಬಿಡ್ತು. ಪುಸ್ತಕದಲ್ಲಿ ದಾಖಲಾಗದ ಇನ್ನೂ ಅದೇಷ್ಟೋ ಘಟನೆಗಳು ನಡೆದಿರಬಹುದು!
ನಾನು ಮಾತ್ರ ನಾಳೆ ನಮಗೆಸ್ವಾತಂತ್ರ ಸಿಕ್ಕ ದಿನಎಂದು ಸರಳವಾಗಿ ವ್ಯಾಖ್ಯಾನಿಸಿಬಿಡುತ್ತೇನೆ.

ಪವಿತ್ರವೆಂದು ಆಹ್ಲಾದಪಟ್ಟಿದ್ದ ಹೋರಾಟ. ಇದರಲ್ಲಿ ಅಂದರೆ ಸಂಭವಿಸಲಿರುವ ಅಪವಿತ್ರ ಅಂತ್ಯದಲ್ಲಿ ಪರ್ಯವಸನವಾಗಬೇಕೆ? ಅತೀವ ವೇದನೆಯಿಂದ ವೇದಗಳ ಋಷಿಗಳ ವಾಣಿಯ ಜೊತೆಗೆ ನನ್ನ ವಾಣಿಯನ್ನೂ ಸೇರಿಸಿ, ‘ಹೇ ಭಗವಾನ್, ಕತ್ತಲನ್ನು ಅಳಿಸು, ಬೆಳಕನ್ನು ಹರಿಸು‘, ಎಂದು ಕೂಗುತ್ತೇನೆ“. ಗಾಂಧಿ ಅಜ್ಜ

ನನ್ನ ದೃಷ್ಟಿಯಲ್ಲಿ ಅಗಸ್ಟ್ 15ಕ್ಕೆ ಯಾವ ಬೆಲೆಯೂ ಇಲ್ಲ. ಇಲ್ಲಿ ಯಾರ ಮುಖದ ಮೇಲೂ ಉತ್ಸಾಹ ಕಂಡುಬರುತ್ತಿಲ್ಲ.” ಗಾಂಧಿ ಅಜ್ಜ

ನಾನು ಇಂದು ದೇಶ ಇಬ್ಬಾಗ ಆದ ಕರಾಳ ದಿನವೂ ಹೌದು ಎಂದು ಯಾವಾಗಲೋ ಮರೆತಿದ್ದೇನೆ. ‘ಉಗ್ರರುಎಂಬ ಹೊಸಪದ ಹುಟ್ಟಿದ ಕಾರಣವೂ( ನನ್ನ ಮಟ್ಟಿಗೆ) ಮರೆತು ಹೋಗಿದೆ. ನಾಳೆ ಪಾಕ್ ಮತ್ತು ಚೀನಾ ಅತಿಕ್ರಮಣ(?)ದಿಂದಾದ ಮುಂಡವಿಲ್ಲದ ಭಾರತ ಮಾತೆಗೆ ಜೈಕಾರ ಕೂಗುತ್ತೇನೆ.

ದಿನದ ಕಾರಣ ಪರಸ್ಪರ ಹಗೆಯಲ್ಲಿ ಬೆಂದು ನೊಂದ ಅದೆಷ್ಟೋ ಅಮಾಯಕರಿಗೆ ಹಾಗೂ ಮುಂದೂ ಸಾಯಾಲಿರುವ ಎಲ್ಲರಿಗೂ ಇದೋ ನನ್ನ ರಕ್ತ ಕಣ್ಣೀರು.

ಮಹಾ ಆತ್ಮ – ೧

ಆಗಷ್ಟ್ 11, 2008

ಗಾಂಧಿ ಅಜ್ಜನ ಕೋಲು, ಅದಕೆ ಇಲ್ಲ ಸೋಲು…….’

ಮೊದಲಿನಿಂದಲೂ ಗಾಂಧಿ ಅಜ್ಜನನ್ನು ಕಂಡರೆ ನನಗೆ ವಿಪರೀತ ಪ್ರೀತಿ. ಸಣ್ಣವಳಿರುವಾಗ ಅಮ್ಮ ಬರೆದುಕೊಡುತ್ತಿದ್ದ ಭಾಷಣಗಳು ಸ್ವಲ್ಪ ಸ್ವಲ್ಪ ಈಗಲೂ ನೆನಪಿವೆ. ನನ್ನ ಪಾಟಿ ಪ್ರೀತಿ ಕಂಡ ನನ್ನ ಹುಡುಗ ನನ್ನ ಬರ್ತಡೆಗೆ ಗಾಂಧಿ ಕುರಿತಾದ ಪುಸ್ತಕವನ್ನು ಗಿಫ್ಟಿಸಿದ್ದ.

ಗ್ರಂಥದ ಹೆಸರುಮಹಾತ್ಮ ಗಾಂಧಿ, ಅಂತಿಮ ಹಂತ“, ಸಂಪುಟ 2, ಅನುವಾದ:ಕೆ. ವಿ. ಶಂಕರಗೌಡ, ಮೂಲ:ಪ್ಯಾರೇಲಾಲ್. ಗಾಂಧಿ ಭವನ, ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆ (1991). ಅದರ ಕೆಲ ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಇಲ್ಲಿನ ಘಟನಾವಳಿಗಳು 1947 ಮಾರ್ಚ್ ನಿಂದ ಶುರುವಾಗುತ್ತದೆ.

ಇದು 61ನೇ ಸ್ವಾತಂತ್ರ್ಯ ಸಂಭ್ರಮಕ್ಕಾಗಿ, ಗಾಂಧಿಯನ್ನು ಹೇಟ್ ಮಾಡುವ ಎಲ್ಲ ಕೆಟಗರಿಯವರಿಗಾಗಿ ಹಾಗೂ ಅಜ್ಜನ ವಿಚಾರಗಳ ಮೇಲಿನ ನನ್ನ ಇಷ್ಟಕ್ಕಾಗಿ.

ಭಗವಂತ ಒಬ್ಬನೇ ಎಂಬುದು ನನ್ನ ನಂಬಿಕೆ. ಆದ್ದರಿಂದಲೇ ಮಾನವ ವರ್ಗವೆಲ್ಲ ಒಂದೇ ಎಂಬುದು ನನ್ನ ನಂಬಿಕೆ………
ಆದ್ದರಿಂದ ಅತ್ಯಂತ ಪಾಪತ್ಮನಿಂದಲೂ ನನ್ನನ್ನು ಬೇರ್ಪಡಿಸಿಕೊಳ್ಳಲಾರೆ. ಅತ್ಯಂತ ಪುಣ್ಯಾತ್ಮರಿಂದಲೂ ನನ್ನ ಅನನ್ಯತೆಯನ್ನು ನಿರಾಕರಿಸಲಾಗದು.” – ಗಾಂಧಿ ಅಜ್ಜ